ಭಾಸ್ಕರ ಜೋಶಿ ಶಿರಳಗಿ ಅವರಿಗೆ ಪಾತಾಳ ಪ್ರಶಸ್ತಿ
ಲೇಖಕರು : ಉದಯವಾಣಿ
ಬುಧವಾರ, ಡಿಸೆ೦ಬರ್ 3 , 2014
|
ಡಿಸೆ೦ಬರ್ 3, 2014
|
ಭಾಸ್ಕರ ಜೋಶಿ ಶಿರಳಗಿ ಅವರಿಗೆ ಪಾತಾಳ ಪ್ರಶಸ್ತಿ
ಮಂಗಳೂರು :
ಎಡನೀರು ಪಾತಾಳ ಯಕ್ಷ ಪ್ರತಿಷ್ಠಾನದ ವತಿಯಿಂದ ನೀಡುವ ಪಾತಾಳ ಪ್ರಶಸ್ತಿಗೆ ಹಿರಿಯ ಸ್ತ್ರೀ ಪಾತ್ರಧಾರಿ ಭಾಸ್ಕರ ಜೋಶಿ ಶಿರಳಗಿ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.
ಡಿ. 7ರಂದು ರಾತ್ರಿ 7 ಗಂಟೆಗೆ ಕಾಸರಗೋಡು ಶ್ರೀ ಎಡನೀರು ಮಠದ ಕೃಷ್ಣ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. 10,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ವಿವರಿಸಿದರು.
ಪಾತಾಳ ಪ್ರಶಸ್ತಿಗೆ ಈಗ ದಶಮಾನೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅಂಕಣಕಾರ ನಾ. ಕಾರಂತ ಪೆರಾಜೆ ಅವರ ಸಂಪಾದಕತ್ವದ 'ಉಪಾಯನ' ಕೃತಿಯನ್ನು ಪ್ರತಿಷ್ಠಾನ ಪ್ರಕಾಶಿಸಿದ್ದು, ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಕೃತಿ ಅನಾವರಣಗೊಳಿಸಲಿದ್ದಾರೆ. ಬಳಿಕ ಶ್ರೀ ಎಡನೀರು ಮೇಳದವರಿಂದ 'ಬೀಷ್ಮಾಭಿದಾನ-ಮೈಂದದ್ವಿವಿದ' ಯಕ್ಷಗಾನ ಬಯಲಾಟ ಜರಗಲಿದೆ ಎಂದು ಅವರು ತಿಳಿಸಿದರು.
ಮಹಾಲಿಂಗ ಭಟ್, ಶ್ರೀರಾಮ ಪಾತಾಳ್ ಉಪಸ್ಥಿತರಿದ್ದರು.
ಕೃಪೆ :
http://www.udayavani.com
|
|
|